ಸೃಷ್ಟಿ ಪಲ್ಲವಿ

ಜಗವು ತೆರೆದ ಬಾಗಿಲು ಹೃದಯಗಣ್ಣ
ತೆರೆದು ನೋಡು ಸೃಷ್ಟಿ ಸತ್ಯ ತಿಳಿಯಲು ||ಪ||

ಬಾನು ಇಳೆಯು ವಾಯುವಗ್ನಿ
ಜಲವು ಜೀವ ಕಾರಣ,
ಜೀವ ದೇವ ದ್ವೈತಾದ್ವೈತ
ಸೃಷ್ಟಿ ಸೊಬಗ ತೋರಣ |

ಭೂಮಿ ಬಾನಿನೊಡಲು ಕಡಲು
ಹಸಿದ ಬಸಿರನ್ಹೂರಣ,
ಬಣ್ಣ-ಬಣ್ಣ-ಬಣ್ಣ ಕಣ್ಣ
ಭಾವ ಭಿನ್ನ ದೌತಣ |

ಚಿತ್ತ ಚೈತ್ಯ ಚೈತ್ರ ಚಿತ್ತು
ನಿತ್ಯವರಳೋ ಮೂಡಣ,
ಶಾಂತ ಶಮ ಶರಣ್ಯ ಶಕುತಿ
ಸಮರಸವದು ಪಡುವಣ |

ಚುಂಚದಂಚುನಂಚಿನಲ್ಲೂ
ಹರುಷ ರವದ ರಿಂಗಣ,
ಮಿಗದ ಮೊಗದ ಕ್ರೂರದಾಚೆ
ಮಾತೃ ಮಮತೆ ಪೋಷಣ, |

ಹೊರಳಿ ಹೊರಳಿ ಮರಳುತಿಹುದು
ಹಗಲಾರುಳಿನೆ ಅಂದಣ,
ಯುಗದಾದಿಯಿಂದ ಸಾಗುತಿಹುದು
ಸೃಷ್ಟಿ-ದೃಷ್ಟಿ ಸಮ್ಮೇಳನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವ್ವ
Next post ….ಎಂದಿರಬೇಕಾಗಿತ್ತು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys